Mankutimmana Kagga by D.V. Gundappa
ತಿದ್ದಿಕೊಳೊ ನಿನ್ನ ನೀಂ; ಜಗವ ತಿದ್ದುವುದಿರಲಿ । ತಿದ್ದಿಕೆಗಮೊಂದು ಮಿತಿಯುಂಟು ಮರೆಯದಿರು ॥ ಉದ್ದ ನೀಂ ಬೆರಳನಿತು ಬೆಳೆದೀಯೆ ಸಾಮಿಂದೆ । ಸ್ಪರ್ಧಿಯೆ ತ್ರಿವಿಕ್ರಮಗೆ?- ಮಂಕುತಿಮ್ಮ ॥ ೨೯೨ ॥
tiddikoLo ninna nIM; jagava tidduvudirali । tiddikegamondu mitiyunTu mareyadiru ॥ udda nIM beraLanitu beLedIye sAminde । spardhiye trivikramage? - Mankutimma ॥ 292 ॥
ಪುರಾಣದಲ್ಲಿ "ಮಹಾವಿಷ್ಣು" ವು ವಾಮನಾವತಾರದಲ್ಲಿ ತನ್ನ ಸ್ವಶಕ್ತಿಯಿಂದ ತ್ರಿವಿಕ್ರಮನಾಗಿ ಬೆಳೆದು ಭೂಮ್ಯಾಕಾಶವನ್ನು ಎರಡು ಹೆಜ್ಜೆಗಳಲ್ಲಿ ಅಳೆದು, ಮೂರನೇ ಹೆಜ್ಜೆಯನ್ನು’ಬಲಿ’ಯ ಶಿರದ ಮೇಲಿರಿಸಿ ಅವನಿಗೆ ಪಾತಾಳದಲ್ಲಿ ಸ್ಥಳ ಕಲ್ಪಿಸಿದ ಕಥೆಯಿದೆ. ನೀನು ಅವನಿಗೆ ಸ್ಪರ್ಧಿಯಾಗಲು ಸಾಧ್ಯವೇ? ಏಕೆಂದರೆ ನೀನು ಎಷ್ಟೇ ಪ್ರಯತ್ನಪಟ್ಟರೂ ಒಂದು ಬೆರಳುದ್ದ ಬೆಳೆಯಬಹುದು. ನಿನ್ನ ಬೆಳವಣಿಗೆಗೆ ಒಂದು ಮಿತಿಯುಂಟು. ನೀನು ನಿನ್ನ ಮಿತಿಯಲ್ಲಿರು. ಜಗತ್ತಿನ ಡೊಂಕನ್ನು ತಿದ್ದಲು ನಿನಗೆ ಸಾಧ್ಯವೇ? ಬದಲಾಗಿ ‘ನಿನ್ನನ್ನೇ ‘ ನೀನು ತಿದ್ದಿಕೋ ಎಂದು ಒಂದು ಸ್ಪಷ್ಟ ಆದೇಶ ನೀಡಿದ್ದಾರೆ ಮಾನ್ಯ ಗುಂಡಪ್ಪನವರು ನಮಗೆ ಈ ಕಗ್ಗದಲ್ಲಿ. ಸಾವಿರಾರು ನ್ಯೂನತೆಗಳನ್ನು ನಮ್ಮಲ್ಲೇ ಇಟ್ಟುಕೊಂಡು ಅನ್ಯರ ದೋಷಗಳನ್ನು ಎತ್ತಿ ತೋರುವುದು ಸರಿಯೇ? ‘ಇವನ ಎಲೇಲಿ ಆನೆ ಸತ್ ಬಿದ್ದಿದ್ರೂ ಬೇರೇವ್ರ ಎಲೇಲಿ ನೊಣ ತೋರಿಸ್ತಾನೆ’ ಎನ್ನುವ ಮಾತು ನಾವು ಬಹಳಷ್ಟು ಬಾರಿ ಕೇಳುತ್ತೇವೆ. ನಮ್ಮ ಕೊರತೆಗಳೇ ನಮ್ಮಲ್ಲಿ ಸಾಕಷ್ಟು ಇರುವಾಗ ಅವುಗಳನ್ನು ಸರಿಪಡಿಸಿಕೊಳ್ಳದೆ ಅಥವಾ ಸರಿಪಡಿಸಿಕೊಳ್ಳುವ ಪ್ರಯತ್ನವನ್ನೂ ಮಾಡದೆ ಪರರ ದೋಷಗಳನ್ನು ಎತ್ತಿ ತೋರುವುದು,ಅದರ ಬಗ್ಗೆ ಚರ್ಚೆ ಮಾಡುವುದು ಮತ್ತು ಅವರಿಗೆ ಪುಕ್ಕಟ್ಟೆಯಾಗಿ ಸಲಹೆಗಳನ್ನು ಕೊಡುವುದು ನಮ್ಮಲ್ಲೆರಲ್ಲೂ ಸರ್ವೇ ಸಾಮಾನ್ಯವಾಗಿ ಕಾಣುವಂತಾ ಗುಣ. ಇದು ಖಂಡಿತಾ ಸರಿಯಲ್ಲ.
"You must work to correct yourself before trying to correct the world. You must remember that there is a limit to this correction. You can do all exercise and make your finger stronger (to point mistakes in others and correct them). But can you be any comparison to Trivikrama?" - Mankutimma
Video Coming Soon
Detailed video explanations by scholars and experts will be available soon.