ಪಟ್ಟಿಗೆ ಹಿಂತಿರುಗಿ

ಕಗ್ಗ 822 - ಮಂಕುತಿಮ್ಮನ ಕಗ್ಗ

ಮಂಕುತಿಮ್ಮನ ಕಗ್ಗ by D.V. Gundappa

ಮೂಲ ಪಠ್ಯ (ಕನ್ನಡ)

ಆತುರತೆಯಿರದ ಸತತೋದ್ಯೋಗ ಸರ್ವಹಿತ । ಭೂತದಾವೇಶವಾತುರತೆಯಾತ್ಮಕ್ಕೆ ॥ ಕಾತರನು ನಿನಾಗೆ ಮೂರನೆಯ ಸಹಭಾಗಿ । ಪ್ರೀತನಾಗುವನೇನೊ? - ಮಂಕುತಿಮ್ಮ ॥ ೮೨೨ ॥

aaturateyirada satata udyOga sarvahita । bhUtada aaveshavu aaturate aatmakke ॥ kAtaranu nInAge mUraneya sahabhAgi । prItanAguvanEno? - Mankutimma ॥ 822 ॥

ಕನ್ನಡದಲ್ಲಿ ಅರ್ಥ

‘ಆತುರತೆ’ ಯಿಲ್ಲದೆ ಸತತವಾಗಿ ಕಾರ್ಯನಿರತನಾಗಿದ್ದರೆ ಅದು ಸರ್ವರ ಹಿತಕ್ಕೆ ಕಾರಣವಾಗುತ್ತದೆ. ಹಾಗಲ್ಲದೆ ಆತುರತೆಯನ್ನು ತೋರಿದರೆ ಅದು ಆತ್ಮಕ್ಕೆ ಭೂತದಾವೇಶದಂತಾಗುತ್ತದೆ. ನೀನು ಕಾತರನಾಗಿ ಸದಾಕಾಲವಿದ್ದರೆ, ನಿನ್ನ ಎಲ್ಲ ಕಾರ್ಯಗಳಲ್ಲಿ ತನ್ನ ಪಾತ್ರವನ್ನೂ ವಹಿಸುವ ಆ ಮೂರನೆಯವನು ಸುಪ್ರೀತನಾಗುವನೇನೋ? ಎಂದು ಒಂದು ಪ್ರಶ್ನೆಯನ್ನು ನಮ್ಮ ಮುಂದಿಟ್ಟಿದ್ದಾರೆ ಮಾನ್ಯ ಗುಂಡಪ್ಪನವರು.

ಅರ್ಥ ಮತ್ತು ವ್ಯಾಖ್ಯಾನ

"Persistent hard work without anxiety will benefit all. If one acts as if he is possessed, then it is not good for the soul. If you do all work in an excited state, then the third party (God, Fate or Luck) involved – other than you and the work, will not be happy." - Mankutimma

ವಿಷಯಗಳು

DevotionMoralityFateDuty

ವೀಡಿಯೊ ವಿಭಾಗ

ವೀಡಿಯೊ ಶೀಘ್ರದಲ್ಲಿ ಬರುತ್ತಿದೆ

ಪಂಡಿತರು ಮತ್ತು ತಜ್ಞರಿಂದ ವಿವರವಾದ ವೀಡಿಯೊ ವಿವರಣೆಗಳು ಶೀಘ್ರದಲ್ಲಿ ಲಭ್ಯವಾಗುತ್ತದೆ.