ಪಟ್ಟಿಗೆ ಹಿಂತಿರುಗಿ

ಕಗ್ಗ 809 - ಮಂಕುತಿಮ್ಮನ ಕಗ್ಗ

ಮಂಕುತಿಮ್ಮನ ಕಗ್ಗ by D.V. Gundappa

ಮೂಲ ಪಠ್ಯ (ಕನ್ನಡ)

ದ್ವೈತವೇನದ್ವೈತವೇನಾತ್ಮದರ್ಶನಿಗೆ? । ಶ್ರೌತಾದಿವಿಧಿಯೇನು? ತಪನಿಯಮವೇನು? ॥ ನೀತಿ ಸರ್ವಾತ್ಮಮತಿಯದರಿನಮಿತ ಪ್ರೀತಿ । ಭೀತಿಯಿಲ್ಲದನವನು - ಮಂಕುತಿಮ್ಮ ॥ ೮೦೯ ॥

dvaitavEnu advaitavEnu aatmadarshanige? । shrautaadi vidhiyEnu? tapa niyamavEnu? ॥ nIti sarvAtma matiyu adarin amita prIti । bhItiyilladan avanu - Mankutimma ॥ 809 ॥

ಕನ್ನಡದಲ್ಲಿ ಅರ್ಥ

ಆತ್ಮದರ್ಶನವಾದವನಿಗೆ ‘ದ್ವೈತ’ ಮತ್ತು ಅದ್ವೈತದಿಂದ ಏನಾಗಬೇಕು?. ಶ್ರುತಿಗಳು ವಿಧಿಸಿರುವ ನಿಯಮಗಳ ಪಾಲನೆ, ತಪಸ್ಸು ಮುಂತಾದವುಗಳನ್ನು ಅವನು ಮಾಡಬೇಕೆಂದಿಲ್ಲ. ಅವನಿಗೆ ಜಗತ್ತಿನಲ್ಲೆಲ್ಲಾ ಪರಮಾತ್ಮನ ಮತ್ತು ಪರತತ್ವದ ದರ್ಶನವಾಗುತ್ತಿರುವಾಗ ಅದರಿಂದ ಎಲ್ಲರಲ್ಲೂಅಮಿತವಾದ ಪ್ರೀತಿಯನ್ನು ಹೊಂದಿರುತ್ತಾನಾದ್ದರಿಂದ ಅವನು ನಿರ್ಭೀತನಾಗಿರುತ್ತಾನೆ ಎಂದು ಪ್ರಸ್ತಾಪಮಾಡಿದ್ದಾರೆ ಮಾನ್ಯ ಗುಂಡಪ್ಪನವರು ಈ ಮುಕ್ತಕದಲ್ಲಿ.

ಅರ್ಥ ಮತ್ತು ವ್ಯಾಖ್ಯಾನ

"For a person who treats the whole of creation as himself, there is no fear. He has unlimited love to give to the world. He is a realized soul. He does not (need not) care about various philosophies of duality or singularity, about rituals and penances." - Mankutimma

ವಿಷಯಗಳು

WisdomLifeMoralityNatureSelfLove

ವೀಡಿಯೊ ವಿಭಾಗ

ವೀಡಿಯೊ ಶೀಘ್ರದಲ್ಲಿ ಬರುತ್ತಿದೆ

ಪಂಡಿತರು ಮತ್ತು ತಜ್ಞರಿಂದ ವಿವರವಾದ ವೀಡಿಯೊ ವಿವರಣೆಗಳು ಶೀಘ್ರದಲ್ಲಿ ಲಭ್ಯವಾಗುತ್ತದೆ.