ಪಟ್ಟಿಗೆ ಹಿಂತಿರುಗಿ

ಕಗ್ಗ 710 - ಮಂಕುತಿಮ್ಮನ ಕಗ್ಗ

ಮಂಕುತಿಮ್ಮನ ಕಗ್ಗ by D.V. Gundappa

ಮೂಲ ಪಠ್ಯ (ಕನ್ನಡ)

ಪ್ರತ್ಯಕ್ಷವಿಲ್ಲದಾ ಸ್ವಾಮಿಯಂ ನೆನೆನೆನೆದು । ಸತ್ಯಭಕ್ತಿಯ ಸೇವೆಗೆಯ್ದವಂ ಭರತಂ ॥ ನಿತ್ಯಜೀವನದಿ ನೀನಾ ನಯವನನುಸರಿಸೊ । ಸ್ವತ್ವದಾಶೆಯ ನೀಗಿ - ಮಂಕುತಿಮ್ಮ ॥ ೭೧೦ ॥

pratyakShavillada aa svAmiyam nene nenedu । satya bhaktiya sEvegeydavam bharatam ॥ nityajIvanadi nInu aa nayavanu anusariso । svatvada aasheyanu nIgi - Mankutimma ॥ 710 ॥

ಕನ್ನಡದಲ್ಲಿ ಅರ್ಥ

ಪ್ರತ್ಯಕ್ಷವಾಗಿ ತನ್ನ ಹಿಂದೆ ನಿಂತು ಆದೇಶಿಸದಿದ್ದರೂ, ರಾಮನನ್ನೇ ರಾಜನೆಂದು ನೆನೆದು ಶ್ರದ್ಧೆಯಿಂದ, ಸತ್ಯವಾದ ಭಕ್ತಿಯಿಂದ ಸೇವೆಯನ್ನು ಮಾಡಿದವನು ಭರತ. ನೀನೂ ಸಹ ನಿನ್ನ ನಿತ್ಯ ಜೀವನದಲ್ಲಿ ಸ್ವಾರ್ಥವನ್ನು ತೊರೆದು, ಭರತನಂತೆ ಜೀವಿಸು ಎಂದು ಒಂದು ಆದೇಶವನ್ನು ನೀಡಿದ್ದಾರೆ ಮಾನ್ಯ ಗುಂಡಪ್ಪನವರು.

ಅರ್ಥ ಮತ್ತು ವ್ಯಾಖ್ಯಾನ

The master is not present to oversee. Yet, Bharata always kept him in his mind and served the cause (being a king) with true dedication. In every day life, we must follow this principle everyday. We must set aside our selfish desires. - Mankutimma

ವಿಷಯಗಳು

LifeSelf

ವೀಡಿಯೊ ವಿಭಾಗ

ವೀಡಿಯೊ ಶೀಘ್ರದಲ್ಲಿ ಬರುತ್ತಿದೆ

ಪಂಡಿತರು ಮತ್ತು ತಜ್ಞರಿಂದ ವಿವರವಾದ ವೀಡಿಯೊ ವಿವರಣೆಗಳು ಶೀಘ್ರದಲ್ಲಿ ಲಭ್ಯವಾಗುತ್ತದೆ.