ಪಟ್ಟಿಗೆ ಹಿಂತಿರುಗಿ

ಕಗ್ಗ 657 - ಮಂಕುತಿಮ್ಮನ ಕಗ್ಗ

ಮಂಕುತಿಮ್ಮನ ಕಗ್ಗ by D.V. Gundappa

ಮೂಲ ಪಠ್ಯ (ಕನ್ನಡ)

ಸಿರಿಮಾತ್ರಕೇನಲ್ಲ, ಪೆಣ್ ಮಾತ್ರಕೇನಲ್ಲ । ಕರುಬಿ ಜನ ಕೆಸರುದಾರಿಯಲಿ ಸಾಗುವುದು ॥ ಬಿರುದ ಗಳಿಸಲಿಕೆಸಪ, ಹೆಸರ ಪಸರಿಸಲೆಸಪ । ದುರಿತಗಳ್ಗೆಣೆಯುಂಟೆ? - ಮಂಕುತಿಮ್ಮ ॥ ೬೫೭ ॥

sirimAtrake enalla, peN mAtrake enalla । karubi jana kesaru dAriyali sAguvudu ॥ biruda gaLisalike esapa, hesara pasarisalu esapa । duritagaLge eNe unTe? - Mankutimma ॥ 657 ॥

ಕನ್ನಡದಲ್ಲಿ ಅರ್ಥ

ಜಗತ್ತಿನ ಜನರು ಕೆಟ್ಟ ದಾರಿಯಲ್ಲಿ ಹೋಗುವುದು ಕೇವಲ ಹಣವನ್ನು ಸಂಪಾದಿಸುವುದಕ್ಕೆ ಮಾತ್ರವಲ್ಲ, ಹೆಣ್ಣನ್ನು ಮೆಚ್ಚಿಸಲಿಕ್ಕಾಗಲೀ ಅಥವಾ ಪಡೆಯಲಿಕ್ಕಾಗಲೀ ಮಾತ್ರವಲ್ಲ. ಹೆಸರು ಗಳಿಸುವುದಕ್ಕೆ ಮತ್ತು ಆ ಗಳಿಸಿದ ಹೆಸರನ್ನು ಜಗತ್ತಿನ ನಾಲ್ಕೂ ಮೂಲೆಗಳಿಗೆ ಪ್ರಚಾರಮಾಡಿಕೊಳ್ಳಲಿಕ್ಕೆ ಇವನು ತುಳಿಯುವ ದುರ್ದಾರಿಗಳಿಗೆ, ಮಾಡುವ ಪಾಪಗಳಿಗೆ ಮಿತಿಯೇ ಇಲ್ಲ ಎಂದು ಇಂದಿಗೂ ಪ್ರಸ್ತುತವಾಗುವಂತೆ ಉಲ್ಲೇಖಮಾಡಿದ್ದಾರೆ ಮಾನ್ಯ ಗುಂಡಪ್ಪನವರು ಈ ಮುಕ್ತಕದಲ್ಲಿ.

ಅರ್ಥ ಮತ್ತು ವ್ಯಾಖ್ಯಾನ

People do not leave the path of dharma and follow a muddy road not just for the well known reasons - wealth and women. They do it even for name and fame. There are enough sins committed by people to attain a good name and an ever spreading and never ending fame." - Mankutimma

ವಿಷಯಗಳು

DeathMoralityDetachmentSociety

ವೀಡಿಯೊ ವಿಭಾಗ

ವೀಡಿಯೊ ಶೀಘ್ರದಲ್ಲಿ ಬರುತ್ತಿದೆ

ಪಂಡಿತರು ಮತ್ತು ತಜ್ಞರಿಂದ ವಿವರವಾದ ವೀಡಿಯೊ ವಿವರಣೆಗಳು ಶೀಘ್ರದಲ್ಲಿ ಲಭ್ಯವಾಗುತ್ತದೆ.